ಮುದ್ರಾ ವಿಜ್ಞಾನಿ ಸುಮನ್ ಚಿಪ್ಲೂಣ್ಕರ್ವಿಶಿಷ್ಠ ಸಾಧನೆ

  ಮುದ್ರಾ ವಿಜ್ಞಾನಿ ಸುಮನ್ ಚಿಪ್ಲೂಣ್ಕರ್

ಸುಮನ್ ಕೇಶವ ಚಿಪಳೂಣ್ಕರ್. ಕಾರ್ಕಳ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲೂಕು. ಕಾರ್ಕಳದಲ್ಲಿ ವಕೀಲ ದುರ್ಗ ವೆಂಕಟೇಶ ಭಟ್ಟರೆಂದರೆ ಬಡವರ ವಕೀಲರೆಂದೇ ಚಿರಪರಿಚಿತರು. ಮೃದು ಭಾಷಿ, ಸ್ನೇಹಮಯಿ. ಖಾದಿಯ ಬಿಳಿಯ ಪಂಚೆ, ಮೇಲೊಂದು ಬಿಳಿಯ ಜುಬ್ಬಾ, ವಕೀಲರು ಧರಿಸುವ ಕರಿಕೋಟು. ಹೊರಗೆ ಹೊರಟರೆಂದರೆ ಗೌರವದಿಂದ ವಂದಿಸುವ ಮಂದಿ. ಇವರ ಪತ್ನಿ ಪದ್ಮಾವತಿ ಸಂಗೀತಜ್ಞೆ, ದೈವ ಭಕ್ತೆ, ಆತಿಥ್ಯಕ್ಕೆ ಇನ್ನೊಂದು ಹೆಸರು. ಕನ್ನಡ, ಮರಾಠಿ, ಹಿಂದಿ ಮತ್ತು ಸಂಸ್ಕೃತ ಹೀಗೆ ನಾಲ್ಕು ಭಾಷೆಗಳಲ್ಲಿ ಬರೆಯಬಲ್ಲ ಕವಯಿತ್ರಿ ಹರಿಕಥೆಯನ್ನು ಮಾಡುತ್ತಿದ್ದರು. ಇಂತಹ ಸುಸಂಸ್ಕೃತ ದಂಪತಿಗಳ ಮೂರನೆಯ ಮಗಳಾಗಿ ಸೆಪ್ಟೆಂಬರ್ 6, 1940ರಲ್ಲಿ ಜನಿಸಿದವರು ಸರೋಜಾ (ತವರು ಮನೆಯ ಹೆಸರು)ಯಾನೆ ಸುಮನ್ ಚಿಪ್ಲೂಣ್ಕರ್.

ಮುಂದೆ ಓದಿ